ಪಟ್ಟೆ, ಬಡಗನ್ನೂರು :ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಇದರ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲ ಚುನಾವಣೆಯು 10 06 2026 ರಂದು ನಡೆದು ಮುಖ್ಯಮಂತ್ರಿ ಯಾಗಿ ಸಾತ್ವಿಕ ಎಸ್. ಎನ್(7ನೇ )ಉಪಮುಖ್ಯಮಂತ್ರಿ ಯಾಗಿ ತೀಕ್ಷಣ್ ಬಿ.ಎಸ್ (6ನೇ ) ಆಯ್ಕೆಯಾಗಿರುತ್ತಾರೆ. ವಿರೋಧ ಪಕ್ಷದ ನಾಯಕನಾಗಿ ವಿನೀತ್ (7ನೇ )ಗೃಹ ಮಂತ್ರಿ ಗೌತಮ್, ರಿತಿನ್ ಟಿ, ಸಾಂಸ್ಕೃತಿಕ ಮಂತ್ರಿ ಹಿತ. ಕೆ. ಜೆ, ಜೋಯ್ಲಿನ್ ಡಿಸೋಜ, ಶಾರ್ವರಿ, ಕ್ರೀಡಾ ಮಂತ್ರಿ ಯಕ್ಷಿತ್, ಮನೀಶ್, ವಿನ್ಯಾಸ್, ಅನ್ನಪೂರ್ಣ, ಅನನ್ಯ ಆರೋಗ್ಯ ಮಂತ್ರಿ ಜಾಹ್ನವಿ ಇಶಾಮ್, ತಜ್ಞ ಬಿ. ರೈ, ಗೋಕುಲ್ ಕೆ. ಎಸ್, ಶಿಸ್ತು ಮಂತ್ರಿ ದ್ವಿತಿಜ್ ಶ್ರೀರೂಪ್, ಪೂರ್ಣಶ್ರೀ, ಮೌತಿಕ, ಕೃಷಿ ಮಂತ್ರಿ ಚೇತನಾ, ದಿಶಾನ್, ಸುಪ್ರಜ್, ಅನ್ವಿತ್,ತ್ವಾಹಿರ್ ಅಹಮದ್, ಸ್ವಚ್ಛತಾ ಮಂತ್ರಿ ಚಿಂತಶ್ರೀ, ಪ್ರಣಿತ್ ರೈ, ಮಾನ್ವಿ ರೈ, ಯಶ್ವಿನ್, ನೀರಾವರಿ ಮಂತ್ರಿ ಪುನೀತ್, ಲಿಖಿತ್ ಗೌಡ, ಸಹಜ್ ಆಯ್ಕೆಯಾಗಿರುತ್ತಾರೆ. ಬ್ಯಾಲೆಟ್ ಪೇಪರ್ ಮುಖಾಂತರ ಮತ ಚಲಾಯಿಸುವ ಮೂಲಕ ಚುನಾವಣೆ ನಡೆಸಲಾಯಿತು. ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ್ ಅವರ ನೇತೃತ್ವ ದಲ್ಲಿ ಲತಾ ಮಾತಾಜಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಮತದಾನವು ಸುಸೂತ್ರವಾಗಿ ಜರುಗಿತು.

