ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ

May 19, 2026
Sewing Machine Distribution

ದ್ವಾರಕಾ ಪ್ರತಿಷ್ಠಾನ (ರಿ.), ಪುತ್ತೂರು ಇದರ ವತಿಯಿಂದ ‘ದ್ವಾರಕಾ – ಆರ್ತ ಸಹಾಯ ಯೋಜನೆ’ಯಡಿಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುತ್ತೂರು ತಾಲೂಕು, ಪಂಚಾಯತ್ ಕಾರ್ಯಾಲಯ ಇವರ ಮುಖೇನ ಬಂದ ಮನವಿಯನ್ನು ಪರಿಗಣಿಸಿ, ಸ್ವಾವಲಂಬಿ ಜೀವನಕ್ಕಾಗಿ ಸಹಾಯ ರೂಪದಲ್ಲಿ ಹೊಲಿಗೆ ಯಂತ್ರವನ್ನು ಮರೀಲ್ ನ ಶ್ರೀ ನಾಗರಾಜ ಇವರಿಗೆ ದಿನಾಂಕ 18-05-2026ರಂದು ಹಸ್ತಾಂತರಿಸಲಾಯಿತು.

ಫಲಾನುಭವಿಯು ತೀವ್ರತರವಾದ ದೈಹಿಕ ವಿಕಲಚೇತನರಾಗಿದ್ದು, ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಯುತರಿಗೆ ಸ್ವ ಉದ್ಯೋಗವನ್ನು ಮಾಡಲು ದ್ವಾರಕಾ ಪ್ರತಿಷ್ಠಾನವು ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಿದೆ.

ಈ ಸಂದರ್ಭದಲ್ಲಿ ಫಲಾನುಭವಿಗಳನ್ನು ಸೇರಿದಂತೆ ಸಂಸ್ಥೆಯ ಇನ್ವೆಂಟರಿ ಮ್ಯಾನೇಜರ್ ಶ್ರೀ ಮೋಹನ ಮೂರ್ತಿ, ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಶ್ರೀ ದುರ್ಗಾಗಣೇಶ ಕೆ. ವಿ. ಉಪಸ್ಥಿತರಿದ್ದರು. ಸಂಸ್ಥೆಯಿಂದ ನೀಡಿದ ಯಂತ್ರವು ಸದ್ವಿನಿಯೋಗಗೊಂಡು ಫಲಾನುಭವಿಗಳ ಮುಂದಿನ ಜೀವನವು ಸುಖಮಯವಾಗಿರಲಿ ಎಂದು ಸಂಸ್ಥೆ ಹಾರೈಸಿದೆ.

Dwaraka Ad

Related Blog

volleyball-team
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆ ಗಳ ವಿದ್ಯಾರ್ಥಿಗಳು ರಾಜ್ಯಮಟ್ಟದ ವಿದ್ಯಾ ಭಾರತಿ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ
consultation meeting for sri krishna leela programme
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಶ್ರೀ ಕೃಷ್ಣ ಲೀಲಾ ಕಾರ್ಯಕ್ರಮದ ಸಮಾಲೋಚನಾ ಸಭೆ
volleyball-team
ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ