ಬಡಗನ್ನೂರುಃ ಭಾರತೀಯ ಗಡಿ ಭದ್ರತಾ ದಳದಲ್ಲಿ ಸುದೀರ್ಘ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಅ. 3 ರಂದು ಹುಟ್ಟೂರಿಗೆ ಆಗಮಿಸಿರುವ ಸುಂದರ ಪೂಜಾರಿ ಪಳಂಬೆ( ನಿಡ್ಪಳ್ಳಿ ) ಅವರನ್ನು ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ವತಿಯಿಂದ ಸ್ವಾಗತಿಸಲಾಯಿತು. ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ ರವರು ಯೋಧ ಸುಂದರ ಪೂಜಾರಿಯವರಿಗೆ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಶಿಕ್ಷಕರಾದ ವಿಶ್ವನಾಥ ಗೌಡ ಬೊಳ್ಳಾಡಿ, ಪ್ರೀತಿ ಕುಮಾರಿ ಎಂ ಪಿ, ಜಯಾಶ್ರೀ ಹೆಚ್, ಭವಿತಾ ಪಿ, ಶ್ರೀ ಕೃಷ್ಣ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಎನ್, ನಿವೃತ್ತ ದೖೆಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮೋನಪ್ಪ ಎಂ ಉಪಸ್ಥಿತರಿದ್ದರು.